ತಂಗಾಳಿ ಬೀಸುತ್ತಿತ್ತು. ಅರಮನೆಯ ಗೋಡೆಗಳ ಮಧ್ಯದ ಕಿಟಕಿಯ ಬಳಿ ಕುಳಿತ್ತಿದ್ದ ತುಳಸಿಯ ಆಲೋಚನೆಗಳು ಒಂದಕ್ಕೊಂದು ತಳುಕು ಹಾಕುತ್ತಿರಲ್ಲಿಲ್ಲ.
ಸರಿ ತಪ್ಪುಗಳ ವಿಶ್ಲೇಷಣೆಗಳಲ್ಲಿ ಮುಳುಗಿತ್ತು ಮನವು.
ನಂದ ಕುಮಾರನ ನಿರಾಕರಣೆಗಿಂತಲೂ ತನ್ನದಲ್ಲದ ತಪ್ಪಿಗೆ ಸಿಕ್ಕ ಲೋಕದ ನಿಂದನೆಗಳಿಗೆ ಸಂಕುಚಿತಗೊಂಡಿದ್ದಳು.
ತುಳಸಿಯ ಮನದ ವ್ಯಾಕುಲತೆಯನ್ನು ಅರಿಯದೇ ಅವಳಿಗೆ ಸಿಕ್ಕ ಈ ಸ್ಥಾನ ನ್ಯಾಯವಾದುದ್ದೇ ಅಲ್ಲವೇ ಅನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು.